ವೀರಾಜಪೇಟೆ, ಸೆ. ೨೩: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದ ತೆರ್ಮೆಮೊಟ್ಟೆಯ ಶ್ರೀ ಆದಿಶಕ್ತಿ ಮತ್ತು ಧರ್ಮದೈವ ಹಾಗೂ ಪಾಷಾಣ ಮೂರ್ತಿ ಪರಿವಾರ ದೈವಗಳ ಧರ್ಮ ಚಾವಡಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ನವರಾತ್ರಿಯ ಮೊದಲ ದಿನ ನವದುರ್ಗೆಯರ ಬಿಂಬವನ್ನು ಕುಳ್ಳಿರಿಸಲಾಯಿತು. ಉತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರಗಳು, ನವದುರ್ಗೆಯರ ಆರಾಧನೆ ನಡೆಯಲಿದ್ದು ಅ. ೧ ರಂದು ನವದುರ್ಗೆಯರ ಬಿಂಬವನ್ನು ವಿಸರ್ಜನೆ ಮಾಡಲಾಗುತ್ತದೆ. ಪೂಜಾ ಕೈಂಕರ್ಯದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.