ವೀರಾಜಪೇಟೆ, ಅ. ೨೮: ಕಾವೇರಿ ನದಿ ಮಾಲಿನ್ಯ ಮತ್ತು ಒತ್ತುವರಿ ಸೇರಿದಂತೆ ವಿನಾಶದ ಅಂಚಿನಲ್ಲಿರುವ ಮಹಶೀರ್ ಮೀನುಗಳು ಇತರೆ ಜಲಚರಗಳ ರಕ್ಷಣೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಅಧ್ಯಕ್ಷ ಕೆ.ಎನ್. ಬೋಸ್ ಮಾದಪ್ಪ ಮನವಿ ಸಲ್ಲಿಸಿದ್ದಾರೆ.

ಸಂಸ್ಕರಣೆ ಮಾಡದೇ ಚರಂಡಿ, ತೋಡು ಮೂಲಕ ತ್ಯಾಜ್ಯ ನೀರನ್ನು ಕಾವೇರಿ ನದಿಗೆ ಮಡಿಕೇರಿ, ನಾಪೋಕ್ಲು, ಸಿದ್ದಾಪುರ, ನೆಲ್ಲಿಹುದಿಕೇರಿ, ಕುಶಾಲನಗರ ಹೀಗೆ ವಿವಿಧೆಡೆಗಳಿಂದ ತ್ಯಾಜ್ಯ ನೀರನ್ನು ಬಿಡಲಾಗುತ್ತಿದ್ದು, ನದಿ ಮತ್ತು ನದಿ ತಟ ಒತ್ತುವರಿಯಾಗಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಾವೇರಿ ನದಿ ಮತ್ತು ಜಲಚರಗಳನ್ನು ಸಂರಕ್ಷಣೆ ಮಾಡುವಂತೆ ಕೋರಿದ್ದಾರೆ.