ವೀರಾಜಪೇಟೆ, ಅ. ೩೦: ವೀರಾಜಪೇಟೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯ ಒಟ್ಟು ೧೧ ಸ್ಥಾನಗಳಿಗೆ ಎಲ್ಲಾ ೧೧ ಅಭ್ಯರ್ಥಿಗಳು ಮುಂದಿನ ೫ ವರ್ಷದ ಅವಧಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎ ತರಗತಿ ಸಹಕಾರ ಸಂಘಗಳ ಪರವಾಗಿ ವಾಟೇರಿರ ಟಿ ಪ್ರೇಮ್ ನಾಣಯ್ಯ, ಪಳಂಗAಡ ಸಿ. ರಾಕೇಶ್, ಬಿ ತರಗತಿ ಸಾಮಾನ್ಯ ಸ್ಥಾನಕ್ಕೆ ಕುಂಬೆರ ಎ. ಮನುಕುಮಾರ್, ಪುಟ್ಟಿಚಂಡ ಎ. ನರೇಂದ್ರ, ಮಾಳೇಟಿರ ಬಿ. ದೇವಯ್ಯ, ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ರಾಮಚಂದ್ರ ಬಿ.ಎಲ್, ಹಿಂದುಳಿದ ಪ್ರವರ್ಗ ಬಿ ಮೀಸಲು ಸ್ಥಾನಕ್ಕೆ ಕಾಣತಂಡ ಎಂ. ಬೋಪಣ್ಣ, ಮಹಿಳಾ ಸದಸ್ಯ ಸ್ಥಾನಕ್ಕೆ ಕೋದಂಡ ಮಂಜುಳಾ ಅಯ್ಯಪ್ಪ, ಇಟ್ಟಿರ ಸಿ. ಮಾಲತಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಎಚ್.ಆರ್ ಕುಂಜ, ಪರಿಶಿಷ್ಟ ವರ್ಗ ಮೀಸಲು ಸ್ಥಾನಕ್ಕೆ ಪರಿವಾರ ಪಿ. ಸುರೇಶ್ ಅವರುಗಳು ಆಯ್ಕೆಯಾಗಿದ್ದಾರೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.