ಚೆಯ್ಯಂಡಾಣೆ, ಜ. ೧ : ಸಮೀಪದ ಕಕ್ಕಬ್ಬೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಗ್ರಾಮದ ದಾನಿಗಳು ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಯುವಕಪಾಡಿ ಗ್ರಾಮದ ಕೊರಂಗಾಡುವಿನ ಮಚಾನಿ ಹಾಸ್ಪಿಟಲಿಟೀಸ್ ಎಲ್‌ಎಲ್‌ಪಿಯ ಶಿವಚಾಳಿಯಂಡ ವಿಶ್ವನಾಥ್, ನೆರವಂಡ ಪೊನ್ನಣ್ಣ ಹಾಗೂ ಪ್ರೀತಿ ಮಚಾನಿಯವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ೨೦ ಸಾವಿರ ರೂ.ಗಳನ್ನು ನೀಡಿದ್ದಾರೆ.

ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ ಪ್ರವಾಸ ಸುಖಕರವಾಗಲಿ ಎಂದು ದಾನಿಗಳು ಶುಭ ಹಾರೈಸಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ. ಕಾರ್ಯಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದದವರು ದಾನಿಗಳ ಉದಾರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.