ಕೋವರ್ ಕೊಲ್ಲಿ ಇಂದ್ರೇಶ್

ಹೈದರಾಬಾದ್, ಏ. ೧; ಆಂಧ್ರ ಪ್ರದೇಶದ ಹೈಕೋರ್ಟ್, ೨೦೦೨ ರ ಸರ್ಫೇಸಿ ಕಾಯ್ದೆಯಡಿಯಲ್ಲಿ ಕೆನರಾ ಬ್ಯಾಂಕ್ ಆರಂಭಿಸಿದ ವಸೂಲಾತಿ ಕ್ರಮಗಳನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. “ಕಾನೂನುಬದ್ಧ ಪರಿಣಾಮಕಾರಿ ಪರ್ಯಾಯ ಪರಿಹಾರ” ಲಭ್ಯವಿದ್ದಾಗ, ಭಾರತದ ಸಂವಿಧಾನದ ೨೨೬ ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವು ತನ್ನ ವಿವೇಚನಾ ನ್ಯಾಯವ್ಯಾಪ್ತಿಯನ್ನು ಚಲಾಯಿಸುವುದನ್ನು ತಡೆಯಬೇಕೆಂದು ನ್ಯಾಯಾಂಗ ವಿವೇಕವು ನಿರ್ದೇಶಿಸುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಮೂರ್ತಿ ರವಿನಾಥ್ ತಿಲ್ಹರಿ ಮತ್ತು ನ್ಯಾಯಮೂರ್ತಿ ಬಾಲಾಜಿ ಮೇಡಮಲ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸರ್ಫೇಸಿ ಕಾಯ್ದೆಯು ಮೇಲ್ಮನವಿಗಳಿಗೆ ನಿರ್ದಿಷ್ಟ ಅವಕಾಶವನ್ನು ಒದಗಿಸಿಕೊಟ್ಟಿದೆ ಮತ್ತು ಶಾಸನಬದ್ಧ ವೇದಿಕೆಗಳನ್ನು ಬೈಪಾಸ್ ಮಾಡುವ ಮೂಲಕ ಈ “ತ್ವರಿತ ಕಾರ್ಯವಿಧಾನವನ್ನು ಹಳಿತಪ್ಪಿಸಲು ಬಿಡಲಾಗುವುದಿಲ್ಲ” ಎಂದು ಪುನರುಚ್ಚರಿಸಿತು.

ಮೆಸರ್ಸ್ ವಾಸವಿ ಎಲೆಕ್ಟ್ರೋ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಮತ್ತು ಅಡಮಾನದಾರ ಇಮ್ಮಡಿ ಈಶ್ವರ ಚಂದ್ರ ವಿದ್ಯಾ ಸಾಗರ್ (೭೫) ಅವರು ಫೆಬ್ರವರಿ ೧೭, ೨೦೨೬ ರಂದು ಸಾಲ ವಸೂಲಾತಿಗಾಗಿ ಕೆನರಾ ಬ್ಯಾಂಕ್ ಸರ್ಫೇಸಿ (Seಛಿuಡಿiಣisಚಿಣioಟಿ ಚಿಟಿಜ ಖeಛಿoಟಿsಣಡಿuಛಿಣioಟಿ oಜಿ ಈiಟಿಚಿಟಿಛಿiಚಿಟ ಂsseಣs ಚಿಟಿಜ ಇಟಿಜಿoಡಿಛಿemeಟಿಣ oಜಿ Seಛಿuಡಿiಣಥಿ Iಟಿಣeಡಿesಣ ಂಛಿಣ) ಕಾಯ್ದೆಯಡಿಯಲ್ಲಿ ಹೊರಡಿಸಿದ್ದ ಮಾರಾಟ ಅಧಿ ಸೂಚನೆಯನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಎನ್‌ಟಿಆರ್ ಜಿಲ್ಲೆಯ ಇಬ್ರಾಹಿಂಪಟ್ಟಣAನಲ್ಲಿರುವ ಅವರ ವಸತಿ ಆಸ್ತಿಯನ್ನು ಭೌತಿಕವಾಗಿ ಸ್ವಾಧೀನಪಡಿಸಿಕೊಳ್ಳಲು ಬ್ಯಾಂಕ್ ಸರ್ಫೇಸಿ ಕಾಯ್ದೆಯ ಸೆಕ್ಷನ್ ೧೪ ರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಿತ್ತು.

ಅರ್ಜಿದಾರರು ಬ್ಯಾಂಕಿನ ಕ್ರಮವನ್ನು ಕಾನೂನುಬಾಹಿರ ಮತ್ತು ಅನಿಯಂತ್ರಿತ ಎಂದು ಘೋಷಿಸಲು ಮ್ಯಾಂಡಮಸ್ ರಿಟ್ ಅರ್ಜಿಯಲ್ಲಿ ಕೋರಿದ್ದರು. ಬ್ಯಾಂಕ್ ತನ್ನ ವಸತಿ ಕಟ್ಟಡವನ್ನು ಮಾರಾಟಕ್ಕೆ ಇರಿಸುವ ಮೊದಲು ಇತರ ವಾಣಿಜ್ಯ, ಕೈಗಾರಿಕಾ ಮತ್ತು ವಸತಿಯೇತರ ಆಸ್ತಿಗಳ ಮೇಲೆ ಮಾರಾಟ ಪ್ರಕ್ರಿಯೆ ಪ್ರಾರಂಭಿಸಬೇಕಿತ್ತು ಎಂದು ಅವರು ವಾದಿಸಿದರು. ಹೆಚ್ಚುವರಿಯಾಗಿ, ಅವರು ಸ್ವತಂತ್ರ ಮೌಲ್ಯಮಾಪಕರಿಂದ ಸ್ವತ್ತುಗಳ ಹೊಸ ಮೌಲ್ಯಮಾಪನವನ್ನು ಮಾಡಿಸಬೇಕೆಂದೂ ವಿನಂತಿಸಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ಶ್ರೀಮತಿ ಟಿ ಸುನೀತ ಅವರು ಬ್ಯಾಂಕಿನ ಕ್ರಮಗಳು ಸಂವಿಧಾನದ ೧೪, ೧೯(೧) (g), ೨೧, ಮತ್ತು ೩೦೦-ಎ ವಿಧಿಗಳ ಅಡಿಯಲ್ಲಿ ನೈಸರ್ಗಿಕ ನ್ಯಾಯದ ತತ್ವಗಳು ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ವಾದಿಸಿದರು. ಕೆನರಾ ಬ್ಯಾಂಕ್ ಪರವಾಗಿ ಹಾಜರಾದ ಶ್ರೀ ಟಿ.ಬಿ.ಎಲ್. ಮೂರ್ತಿ, ಪ್ರಕ್ರಿಯೆಗಳು ಕಾನೂನಿಗೆ ಅನುಗುಣವಾಗಿವೆ ಮತ್ತು ಅರ್ಜಿದಾರರಿಗೆ ಕಾಯ್ದೆಯಡಿ ಪರ್ಯಾಯ ಪರಿಹಾರವಿದೆ ಎಂದು ಸಮರ್ಥಿಸಿಕೊಂಡರು.

ಅರ್ಜಿದಾರರು ಸರ್ಫೇಸಿ ಕಾಯ್ದೆಯ ಸೆಕ್ಷನ್ ೨(೧) (ಜಿ) ಅಡಿಯಲ್ಲಿ ಸಾಲಗಾರರ ಜಾಮೀನುದಾರರಾಗಿದ್ದಾರೆ ಎಂದು ನ್ಯಾಯಾಲಯವು ಗಮನಿಸಿ, ಸೆಕ್ಷನ್ ೧೩(೪) ಅಡಿಯಲ್ಲಿ ತೆಗೆದುಕೊಂಡ ಕ್ರಮಗಳ ಮೇಲೆ ಸವಾಲನ್ನು ನಿರ್ದೇಶಿಸಲಾಗಿರುವುದರಿಂದ, ಅರ್ಜಿದಾರರಿಗೆ ಕಾಯ್ದೆಯಡಿಯಲ್ಲಿಯೇ ಶಾಸನಬದ್ಧ ಪರಿಹಾರ ಲಭ್ಯವಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಇದಲ್ಲದೆ, ಮಾರಾಟ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ಕೋರಿಕೆಯನ್ನು ಉಲ್ಲೇಖಿಸುತ್ತಾ, “ಮಧ್ಯಂತರ ಪರಿಹಾರದ ಸ್ವರೂಪದಲ್ಲಿ ಆದೇಶವನ್ನು ಹೊರಡಿಸುವುದು ಸಾದ್ಯವಿಲ್ಲ ಎಂದು ಹೇಳಿದೆ. ಶಾಸನಬದ್ಧ ಪರಿಹಾರವನ್ನು ತಪ್ಪಿಸಲು ಯಾವುದೇ ಅಸಾಧಾರಣ ಸಂದರ್ಭ ಕಂಡು ಬಂದಿಲ್ಲ ಎಂದು ಹೇಳಿದ ಹೈಕೋರ್ಟ್, ರಿಟ್ ಅರ್ಜಿಯನ್ನು ವಜಾಗೊಳಿಸಿತು.